Menu
- SSLC DOCUMENTS
- sslc videos
- ೮ನೇ ತರಗತಿ ಕನ್ನಡ
- ೯ನೇ ತರಗತಿ ಕಡತಗಳು
- ಚಂದನ ಟಿವಿ ಸಂವೇದ
- others
- ವ್ಯಾಕರಣ
- 9th kan videos
- sslc audio
- ರಸಪ್ರಶ್ನೆ ಕಾರ್ಯಕ್ರಮ
- 9th kannada poems audio
- ೮ನೇ ತರಗತಿ ವೀಡಿಯೂಗಳು
- ೮ನೆ ತರಗತಿ ಆಡಿಯೋ
- Vidyagama 9th videos
- Vidyagama 8th Kannada
- KAN WORK BOOKS
- Sslc question bank
- NMMS GMAT 2020
- ಕನ್ನಡ ಕುಸುಮ
- ಸೇತುಬಂಧ
- Ss
- Best collections
- Useful Formats
- ಸ್ವರಚಿತ ಕವನಗಳು
Tuesday, 30 October 2018
Monday, 29 October 2018
Saturday, 27 October 2018
Thursday, 25 October 2018
Wednesday, 24 October 2018
Tuesday, 23 October 2018
Monday, 22 October 2018
Sunday, 21 October 2018
Friday, 19 October 2018
Thursday, 18 October 2018
Wednesday, 17 October 2018
Tuesday, 16 October 2018
Sunday, 14 October 2018
Saturday, 13 October 2018
ರಾಧಾಕೃಷ್ಣನ್
ಸರ್ವೆಪಲ್ಲಿ ರಾಧಾಕೃಷ್ಣನ್
ಭಾರತದ ಮಾಜಿ ರಾಷ್ಟ್ರಪತಿ, ಭಾರತದ ಸರ್ವೆಪಲ್ಲಿ ರಾಧಾಕೃಷ್ಣನ್ ಜನ್ಮ ದಿನಾಂಕ: ೫ ಸೆಪ್ಟೆಂಬರ್ ೧೮೮೮ ನಿಧನರಾದ ದಿನಾಂಕ: ೧೭ ಏಪ್ರಿಲ್ ೧೯೭೫
ಭಾರತದ ರಾಷ್ಟ್ರಪತಿಗಳು ಅವಧಿಯ ಕ್ರಮಾಂಕ: ೨ನೇ ರಾಷ್ಟ್ರಪತಿ ಅಧಿಕಾರ ವಹಿಸಿದ ದಿನಾಂಕ: ೧೩ ಮೇ ೧೯೬೨ ಅಧಿಕಾರ ತ್ಯಜಿಸಿದ ದಿನಾಂಕ: ೧೩ ಮೇ ೧೯೬೭ ಪೂರ್ವಾಧಿಕಾರಿ: ಡಾ.ಬಾಬು ರಾಜೇ೦ದ್ರ ಪ್ರಸಾದ್
ವೆಲ್ಲೂರಿನಲ್ಲಿರುವಾಗಲೇ ಕೇವಲ ೧೬ ನೇ ವಯಸ್ಸಿನಲ್ಲಿ ಶಿವಕಾಮಮ್ಮ ಎಂಬುವವರನ್ನು ಬಾಳಸಂಗಾತಿಯನ್ನಾಗಿಸಿಕೊಂಡ ರಾಧಾಕೃಷ್ಣನ್, ೧೯೦೯ ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಹಾಯಕ ಉಪನ್ಯಾಸಕರಾಗಿ ಅಚ್ಚುಮೆಚ್ಚಿನ ಶಿಕ್ಷಕ ಸೇವೆ ಯನ್ನಾರಂಭಿಸಿದರು.
ಮಹಾ ಶಿಕ್ಷಕನಾಗಿ ಸಂಪಾದಿಸಿ ಭಾರತದ ಸನಾತನ ಧರ್ಮವಾದ ಹಿಂದೂ ಧರ್ಮದ ಸಾರ, ವೇದ, ಉಪನಿಷತ್, ಜೈನ ತತ್ವಜ್ಞಾನ, ಶಂಕರ ರಾಮಾನುಜ, ಮಧ್ವ, ಪ್ಲೇಟೋ, ಪ್ಲಾಟಿನಸ್, ಕಾಂತ್, ಬ್ರ್ಯಾಡ್ಲೆ ಮುಂತಾದ ಮಹನೀಯರ ತತ್ವಜ್ಞಾನವನ್ನು ಆಳವಾಗಿ ಅಧ್ಯಯನ ಕೈಗೊಂಡರು. ಸತತ ಅಧ್ಯಯನ ಮತ್ತು ಕಠಿಣ ಪರಿಶ್ರಮದಿಂದ ಹಂತ ಹಂತವಾಗಿ ಮೇಲೇರುತ್ತಾ ಮುನ್ನಡೆದರು. ರಾಧಾಕೃಷ್ಣನ್ 1918ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ, ತತ್ವಜ್ಞಾನ ವಿಭಾಗದ ಉಪನ್ಯಾಸಕರಾಗಿ ಆಯ್ಕೆಯಾದರು. ದೇಶ ವಿದೇಶಗಳ ವಿವಿಧ ತತ್ವಜ್ಞಾನ ಪತ್ರಿಕೆಗಳಲ್ಲಿ ತಮ್ಮ ಆಳ ಮತ್ತು ಹರಿತವಾದ ವಿಚಾರಗಳನ್ನು ಹೊಂದಿದ್ದ ಲೇಖನಗಳನ್ನು ಬರೆಯುತ್ತಾ ಸಾಗಿದ ರಾಧಾಕೃಷ್ಣನ್, 'ದಿ ಫಿಲಾಸಫಿ ಆಫ್ ರವೀಂದ್ರನಾಥ್ ಠ್ಯಾಗೋರ್' ಎಂಬ ಮೊದಲ ಪುಸ್ತಕ ಬರೆದರು. ಇವರು ತೆಲುಗಿನಲ್ಲಿ ತಮ್ಮ ಸಹಿಯನ್ನು "ರಾಧಾಕ್ರಿಶ್ಣಯ್ಯ"ಎಂದು ಹಾಕುತಿದ್ದರು. ಮೈಸೂರಿನಲ್ಲಿ ಇವರ ಹೆಸರಿನ ರಸ್ತೆಯೊಂದಿದೆ.
ತತ್ವಶಾಸ್ತ್ರದಲ್ಲಿ ಅನುಪಮ ಕೊಡುಗೆ ಸಂಪಾದಿಸಿ ಭಾರತೀಯ ಪುಸ್ತಕೋದ್ಯಮದಲ್ಲಿ ಮಿಂಚುತ್ತಾ ಸಾಗಿದ ಇವರು, ಮುಂದೆ 'ಜಿನೀನ್ ಮೆನಿಫೆಸ್ಟೇಷನ್ ಆಫ್ ಇಂಡಿಯನ್ ಸ್ಪಿರಿಟ್' ಮತ್ತು 'ದಿ ರೀಜನ್ ಆಫ್ ರಿಲಿಜಿಯನ್ ಇನ್ ಕಾಂಟೆಂಪರರಿ ಫಿಲಾಸಫಿ' ಎನ್ನುವ ಪುಸ್ತಕಗಳನ್ನು ಸಹ ಬರೆದಿದ್ದಾರೆ. ತಮ್ಮ ಅಪಾರವಾದ ಪಾಂಡಿತ್ಯದಿಂದಾಗಿ ದೇಶ ವಿದೇಶಗಳಲ್ಲಿ ಮನೆಮಾತಾಗಿದ್ದರು. ಇವರ ತತ್ವಜ್ಞಾನಕ್ಕೆ ಶರಣಾದ ಆಕ್ಸ್ಫರ್ಡ್ ವಿಶ್ವವಿದ್ಯಾಲಯ 'ಧರ್ಮ ಮತ್ತು ನೀತಿಶಾಸ್ತ್ರ' ಎನ್ನುವ ವಿಷಯದ ಮೇಲೆ ಉಪನ್ಯಾಸ ನೀಡುವಂತೆ ಆಹ್ವಾನಿಸಿತು. ಸಪ್ತಸಾಗರಗಳಾಚೆ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದು, ಭಾರತೀಯ ಸ್ವಾತಂತ್ರ್ಯಕ್ಕಾಗಿಯೂ ಹೋರಾಡಿದ ರಾಧಾಕೃಷ್ಣನ್, ಭಾರತೀಯ ಸನಾತನ ಧರ್ಮ, ತತ್ವಜ್ಞಾನ ಕುರಿತು ವಿದೇಶಿಯರಿಗೆ ಮನಮುಟ್ಟುವಂತೆ ಮನವರಿಕೆ ಮಾಡಿಕೊಟ್ಟು ಬಂದರು.
ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಗಳು ಸಂಪಾದಿಸಿ ೧೯೩೧ ರಲ್ಲಿ ಆಂಧ್ರ ವಿಶ್ವವಿದ್ಯಾಲಯದ girish ಉಪಕುಲಪತಿಗಳಾಗಿ ಆಯ್ಕೆಯಾದ ರಾಧಾಕೃಷ್ಣನ್, ಐದು ವರ್ಷಗಳ ಕಾಲ ತಾವೊಬ್ಬ ಉತ್ತಮ ಶಿಕ್ಷಣ ಸುಧಾರಕರೂ ಹೌದು ಎಂಬುದನ್ನು ತಮ್ಮ ಸೇವಾವಧಿಯಲ್ಲಿ ತೋರಿಸಿಕೊಟ್ಟರು. ಇವರ ಅವಧಿಯಲ್ಲಿ ವಿಶ್ವವಿದ್ಯಾಲಯ ಅನೇಕ ಶಿಕ್ಷಣ ಮತ್ತು ಶಿಕ್ಷಣೇತರ ಸುಧಾರಣೆಗಳನ್ನು ಕಂಡಿತು. ೧೯೩೯ ರಲ್ಲಿ ಬನಾರಸ್ ವಶ್ವವಿದ್ಯಾಲಯದ ಉಪಕುಲಪತಿಗಳಾಗಿ ಆಯ್ಕೆಯಾದರು. ಅಲ್ಲಿಯೂ ತಮ್ಮ ಅನುಭವವನ್ನು ಧಾರೆ ಎರೆಯುವ ಮೂಲಕ ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ರಾಧಾಕೃಷ್ಣನ್ ಅವರನ್ನು, ೧೯೪೮ ರಲ್ಲಿ ವಿಶ್ವವಿದ್ಯಾಲಯ ಶಿಕ್ಷಣ ಆಯೋಗದ ಮುಖ್ಯಸ್ಥರನ್ನಾಗಿ ಸರಕಾರ ನೇಮಿಸಿತು. ೧೯೪೯ ರಲ್ಲಿ ಸೋವಿಯತ್ ರಷ್ಯಾಕ್ಕೆ ಭಾರತದ ರಾಯಭಾರಿಯಾಗಿ ನೇಮಕಗೊಂಡ ರಾಧಾಕೃಷ್ಣನ್, ಸ್ಟಾಲಿನ್ನಂತಹ ಮೇಧಾವಿಗಳ ಸರಿಸಮನಾಗಿ ನಿಲ್ಲುವ ವ್ಯಕ್ತಿತ್ವವನ್ನು ಬೆಳೆಸಿಕೊಂಡರು.]
ಮೊಟ್ಟ ಮೊದಲ ಉಪರಾಷ್ಟ್ರಪತಿಯಾಗಿ ಸಂಪಾದಿಸಿ 1962 ರಲ್ಲಿ ಭಾರತದ ಶಿಕ್ಷಕನೊಬ್ಬ ಮೊಟ್ಟಮೊದಲ ಉಪರಾಷ್ಟ್ರಪತಿಯಾಗಿ ನೇಮಕಗೊಂಡ 'ರಾಧಾಕೃಷ್ಣನ್', ರಾಜ್ಯಸಭೆಯಲ್ಲಿ ಸಂಸ್ಕೃತ ಶ್ಲೋಕಗಳ ಮೂಲಕ ಎಲ್ಲ ಸಂಸತ್ ಸದಸ್ಯರ ಗಮನ ಸೆಳೆಯುತ್ತಿದ್ದರು. 'ರಾಧಾಕೃಷ್ಣನ್' ಅವರ ಅಪಾರ ಸೇವೆಯನ್ನು ಗುರುತಿಸಿ ಗೌರವಿಸಿದ ಭಾರತ ಸರಕಾರ ಉಪರಾಷ್ಟ್ರಪತಿ ಹುದ್ದೆಯಲ್ಲಿದಾಗಲೇ ಅವರಿಗೆ ೧೯೫೪ ರಲ್ಲಿ ಪ್ರತಿಷ್ಠಿತ 'ಭಾರತ ರತ್ನ ಪ್ರಶಸ್ತಿ' ನೀಡಿ ಗೌರವಿಸಿತು. ಆಗ ರಾಧಾಕೃಷ್ಣನ್ ಅವರು ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ ತತ್ತ್ವಶಾಸ್ತ್ರ ವಿಭಾಗದಲ್ಲಿ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಮ್ಮ ಗುರು ಉಪರಾಷ್ಟ್ರಪತಿಯಾಗಿ ದೆಹಲಿಗೆ ಹೊರಡುವ ಸಂದರ್ಭದಲ್ಲಿ ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು, ಅವರನ್ನು ಕಳುಹಿಸಿ ಕೊಡಲು ಸಾರೋಟನ್ನು ತಂದು ಅಲಂಕರಿಸಿ, ಕುದುರೆಯ ಬದಲು ತಾವೇ ಕುದುರೆಗಳಂತೆ, ರಾಧಾಕೃಷ್ಣನ್ ಅವರು ಕುಳಿತ ಸಾರೋಟನ್ನು ಪ್ರೀತಿಪೂರ್ವಕವಾಗಿ ರೈಲ್ವೆ ನಿಲ್ದಾಣದವರೆಗೂ ಎಳೆದು ಕೊಂಡು ಹೋಗಿ, ಭಾವಪೂರ್ಣ ವಿದಾಯ ಹೇಳಿದ್ದರು. ಈ ಸನ್ನಿವೇಶವನ್ನು ಕಂಡು ರಾಧಾಕೃಷ್ಣನ್ ಅವರು ಭಾವುಕರಾಗಿದ್ದರಂತೆ. ಅವರು ಆಗಾಗ ಈ ಸಂದರ್ಭವನ್ನು ನೆನೆಸಿಕೊಳ್ಳುತ್ತಿದ್ದರು. ಇದೇ ಸಂದರ್ಭದಲ್ಲಿ ರಾಧಾಕೃಷ್ಣನ್ ಕುರಿತು ಅಮೆರಿಕಾದಲ್ಲಿ 'ಫಿಲಾಸಫಿ ಆಫ್ ಡಾ.ಸರ್ವಪಲ್ಲಿ ರಾಧಾಕೃಷ್ಣನ್' ಪುಸ್ತಕ ಬಿಡುಗಡೆಗೊಂಡಿತು. 'ಡಾ. ರಾಜೇಂದ್ರ ಪ್ರಸಾದ್' ನಂತರ, ೧೯೬೨ ರಲ್ಲಿ ಭಾರತದ ಎರಡನೇ ರಾಷ್ಟ್ರಪತಿಯಾಗಿ ಆಯ್ಕೆಯಾದ ರಾಧಾಕೃಷ್ಣನ್, ತಮ್ಮ ಅಧಿಕಾರಾವಧಿಯಲ್ಲಿ ದೇಶದ ಸರ್ವತೋಮುಖ ಏಳಿಗೆಗೆ ಅವಿರತ ಶ್ರಮಿಸಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಂಬಂಧಗಳನ್ನು ಉನ್ನತೀಕರಣಗೊಳಿಸುತ್ತಾ, ದೇಶದೊಳಗಿನ ಆಂತರಿಕ ಕಲಹಗಳಿಗೆ ತಿಲಾಂಜಲಿ ನೀಡುತ್ತಾ, ದೇಶವನ್ನು ಸುಭಿಕ್ಷವಾಗಿಸಿದ ಕೀರ್ತಿ 'ಡಾ.ರಾಧಾ ಕೃಷ್ಣನ್' ಅವರಿಗೆ ಸಲ್ಲುತ್ತದೆ.
Friday, 12 October 2018
Thursday, 11 October 2018
Wednesday, 10 October 2018
Tuesday, 9 October 2018
Monday, 8 October 2018
Sunday, 7 October 2018
Wednesday, 3 October 2018
Tuesday, 2 October 2018
Monday, 1 October 2018
kathe
*🌻ದಿನಕ್ಕೊಂದು ಕಥೆ🌻*
*ನೀವು ಅವರಿಗೆ ಇಂದು ‘ಹಲೋ’ ಹೇಳಿದಿರಾ?*
ಕುತೂಹಲ ಹುಟ್ಟಿಸುವಂತಹ ವ್ಯಕ್ತಿತ್ವ ವಿಕಸನ ಉಪನ್ಯಾಸಕರೊಬ್ಬರು ಅಮೇರಿಕಾದಲ್ಲಿದ್ದಾರೆ. ಅವರ ಹೆಸರು ಚಾಲ್ಸರ್ ಅವರು ಒಂದು ವಿಚಿತ್ರ ಪ್ರಶ್ನೆ ಕೇಳಿಯೇ ತಮ್ಮ ಉಪನ್ಯಾಸಗಳನ್ನು ಪ್ರಾರಂಭಿಸುತ್ತಾರೆ. ಆ ಪ್ರಶ್ನೆ ಏನೆಂದರೆ ‘ನಿಮ್ಮ ಪ್ಯಾರಾಚೂಟನ್ನು ಇಂದು ಯಾರು ಪ್ಯಾಕ್ ಮಾಡಿಕೊಟ್ಟರು?’ ಬದುಕಿನಲ್ಲಿ ಎಂದೂ ವಿಮಾನವನ್ನೇರದ ಅಥವಾ ಪ್ಯಾರಾಚೂಟ್ ಬಳಸದ ಸಭಿಕರು ಈ ಪ್ರಶ್ನೆ ಕೇಳಿ ಅಚ್ಚರಿಯಿಂದ ಹುಬ್ಬೇರಿಸುತ್ತಾರೆ. ಆಗ ಚಾಲ್ಸರ್ ತಮ್ಮ ನಿಜಜೀವನದ ಅನುಭವವನ್ನು ಹೀಗೆ ಹೇಳುತ್ತಾರೆ.
‘ನಾನು ವಿಯೇಟ್ನಾಮ್ನಲ್ಲಿ ಯುದ್ಧವಿಮಾನದ ಪೈಲಟ್ ಆಗಿದ್ದೆ. ಯಶಸ್ವಿಯಾಗಿ ಯುದ್ಧ ವಿಮಾನವನ್ನು ಚಲಾಯಿಸುತ್ತಿದ್ದೆ. ಆದರೆ ಕೊನೆಯ ಬಾರಿ ನಾನಿದ್ದ ಒಂದು ಕ್ಷಿಪಣಿಗೆ ತುತ್ತಾಗಿ ನುಚ್ಚು ನೂರಾಯಿತು. ಸುಟ್ಟು ಭಸ್ಮವಾಯಿತು. ಅದೃಷ್ಟವಶಾತ್ ನಾನು, ಕ್ಷಿಪಣಿ ಬಂದು ವಿಮಾನಕ್ಕೆ ಅಪ್ಪಳಿಸುವುದಕ್ಕೆ ಮುಂಚೆ ಪ್ಯಾರಾಚೂಟ್ ಬಳಸಿ ವಿಮಾನದಿಂದ ಹೊರಕ್ಕೆ ಜಿಗಿದುಬಿಟ್ಟೆ. ಪ್ರಾಣವೇನೋ ಉಳಿಯಿತು. ಆದರೆ ನಾನು ಕಮ್ಯುನಿಸ್ ವಿಯೇಟ್ನಾಮಿನಲ್ಲಿ ಯುದ್ಧ ಖೈದಿಯಾಗಿ ಆರು ವರ್ಷ ಕಳೆಯಬೇಕಾಯಿತು. ಅಲ್ಲಿಂದ ಬಿಡುಗಡೆ ಹೊಂದಿದ ನಂತರ ನಾನು ಪೈಲಟ್ ಕೆಲಸ ಬಿಟ್ಟು ‘ವ್ಯಕ್ತಿತ್ವ ವಿಕಸನ’ ಉಪನ್ಯಾಸಗಳನ್ನು ನೀಡುವ ವೃತ್ತಿಯನ್ನು ಕೈಗೆತ್ತಿಕೊಂಡೆ.
ಒಮ್ಮೆ ನಾನು ಉಪಾಹಾರ ಗೃಹವೊಂದರಲ್ಲಿ ಕುಳಿತಿದ್ದಾಗ ಟೇಬಲ್ಲಿನಲ್ಲಿ ಕುಳಿತಿದ್ದ ಒಬ್ಬಾತ ಬಳಿ ಬಂದು ‘ನೀವು ವಿಯೇಟ್ನಾಮಿನಲ್ಲಿ ಯುದ್ಧವಿಮಾನದ ಪೈಲಟ್ ಆಗಿದ್ದ ಚಾಲ್ಸರ್ ಪ್ಲಂಬ್ ಅಲ್ಲವೇ? ನಿಮ್ಮ ವಿಮಾನ ಕ್ಷಿಪಣಿ ದಾಳಿಗೆ ತುತ್ತಾಗಿ ಸುಟ್ಟು ಭಸ್ಮವಾದರೂ ನೀವು ಪ್ಯಾರಾಚೂಟ್ ಸಹಾಯದಿಂದ ಬದುಕುಳಿದಿರಲ್ಲವೇ?’ ಎಂದರು.
ನಾನು ಆಶ್ಚರ್ಯದಿಂದ ‘ನಿಮಗಿದೆಲ್ಲ ಹೇಗೆ ಗೊತ್ತು?’ ಎಂದು ಪ್ರಶ್ನಿಸಿದೆ. ಆತ ‘ನೀವು ಅಂದು ಬಳಸಿದ ಪ್ಯಾರಾಚೂಟನ್ನು ಪ್ಯಾಕ್ ಮಾಡಿದವನು ನಾನೇ! ನಾನು ಆಗ ವೈಮಾನಿಕ ದಳದಲ್ಲಿ ನೌಕರನಾಗಿದ್ದೆ’ ಎಂದ. ನಾನು ಎದ್ದು ನಿಂತು ಆತನ ಕೈಕುಲುಕಿ ‘ನೀವು ಅಂದು ಪ್ಯಾರಾಚೂಟನ್ನು ನನಗೆ ಪ್ಯಾಕ್ ಮಾಡಿ ಕೊಟ್ಟಿದ್ದಿರಿ. ಅದರಿಂದಾಗಿಯೇ ಇಂದು ನಾನು ಬದುಕುಳಿದಿದ್ದೇನೆ’ ಎಂದು ಹೇಳಿ ಅವರನ್ನು ಬೀಳ್ಕೊಟ್ಟೆ.
ಅಂದು ರಾತ್ರಿ ನನಗೆ ಬಹಳ ಹೊತ್ತು ನಿದ್ದೆ ಬರಲಿಲ್ಲ. ನಾನಂದು ದೊಡ್ಡ ಪೈಲೆಟ್. ಆತ ಸಾಮಾನ್ಯ ನೌಕರ. ಆದರೆ ಅಂದು ಪ್ಯಾರಾಚೂಟ್ ಪ್ಯಾಕ್ ಮಾಡಿಕೊಟ್ಟು ನನ್ನ ಪ್ರಾಣ ಉಳಿಸಿದ್ದ. ನಾನು ಆತನನ್ನು ದಿನಾ ನೋಡುತ್ತಿದ್ದೆ. ಗಮನಿಸಿರಲಿಲ್ಲ. ಒಮ್ಮೆಯೂ ಆತನಿಗೆ ಗುಡ್ ಮಾರ್ನಿಂಗ್ ಹೇಳಿರಲಿಲ್ಲ. ಹೇಗಿದ್ದೀರೆಂದು ನನ್ನ ಪ್ರಾಣವನ್ನು ಉಳಿಸಿದ ಆತನನ್ನು ನಾನು ಅಂದೇ ಗಮನಿಸಬೇಕಿತ್ತು ಎಂದುಕೊಂಡೆ. ನಾನು ಅಂದು ಒಂದು ಅಮೂಲ್ಯ ಪಾಠ ಕಲಿತೆ. ಹೀಗೆ ಹೇಳಿ ಪ್ಲಂಬ್ ಅವರು ತಮ್ಮ ಉಪನ್ಯಾಸವನ್ನು ಮುಗಿಸುತ್ತಾರೆ. ಈ ಉಪನ್ಯಾಸವನ್ನು ಅವರದ್ದೇ ಮಾತುಗಳಲ್ಲಿ ನಾವು ಯೂ ಟ್ಯೂಬಿನಲ್ಲಿ ಕೇಳಬಹುದು!
ಈಗ ಪ್ಲಂಬ್ ಅವರಿಗೆ ಧನ್ಯವಾದಗಳನ್ನು ಹೇಳೋಣ. ನಾವೂ ನಮ್ಮ ಬದುಕಿನಲ್ಲಿ ಇಂದು ಏನಾಗಿದ್ದೇವೆಯೋ ಅದಕ್ಕೆ ಸಹಾಯ ಮಾಡಿದವರು ಯಾರೋ ಒಬ್ಬರು ಇರಬಹುದು. ಅವರು ನಮ್ಮ ತಂದೆ-ತಾಯಿ, ಉಪಾಧ್ಯಾಯರು, ಗೆಳೆಯ ಯಾರೋ ಆಗಿರಬಹುದು. ಇಂದು ಅಂತಸ್ತಿನಲ್ಲಿ ಅವರು ನಮ್ಮ ಸಮಾನರಾಗಿಲ್ಲದೆ ಇರಬಹುದು. ಅವರು ನಮಗೆ ಗುರುತು ಸಿಗದೆ ಇರಬಹುದು. ಇನ್ನು ಮುಂದೆ ಅವರು ಯಾರೇ ಇರಲಿ, ಅವರು ನಮ್ಮೆದುರಿಗೆ ಬಂದಾಗ, ನಾವು ಅವರತ್ತ ಮುಗುಳ್ನಗೆ ಬೀರಬಹುದು. ಹೆಲ್ಲೋ ಹೇಳಬಹುದು ಅಥವಾ ಅವರಿಗೊಂದು ಧನ್ಯವಾದವನ್ನೂ ಹೇಳಬಹುದು. ಏಕೆಂದರೆ ಇಂದು ನಾವೇನಾಗಿದ್ದೇವೋ, ಎಲ್ಲಿದ್ದೇವೋ, ಅದಕ್ಕೆ ಅವರೇ ಕಾರಣರಲ್ಲವೇ?
*ನೀವು ಅವರಿಗೆ ಇಂದು ‘ಹಲೋ’ ಹೇಳಿದಿರಾ?*
ಕುತೂಹಲ ಹುಟ್ಟಿಸುವಂತಹ ವ್ಯಕ್ತಿತ್ವ ವಿಕಸನ ಉಪನ್ಯಾಸಕರೊಬ್ಬರು ಅಮೇರಿಕಾದಲ್ಲಿದ್ದಾರೆ. ಅವರ ಹೆಸರು ಚಾಲ್ಸರ್ ಅವರು ಒಂದು ವಿಚಿತ್ರ ಪ್ರಶ್ನೆ ಕೇಳಿಯೇ ತಮ್ಮ ಉಪನ್ಯಾಸಗಳನ್ನು ಪ್ರಾರಂಭಿಸುತ್ತಾರೆ. ಆ ಪ್ರಶ್ನೆ ಏನೆಂದರೆ ‘ನಿಮ್ಮ ಪ್ಯಾರಾಚೂಟನ್ನು ಇಂದು ಯಾರು ಪ್ಯಾಕ್ ಮಾಡಿಕೊಟ್ಟರು?’ ಬದುಕಿನಲ್ಲಿ ಎಂದೂ ವಿಮಾನವನ್ನೇರದ ಅಥವಾ ಪ್ಯಾರಾಚೂಟ್ ಬಳಸದ ಸಭಿಕರು ಈ ಪ್ರಶ್ನೆ ಕೇಳಿ ಅಚ್ಚರಿಯಿಂದ ಹುಬ್ಬೇರಿಸುತ್ತಾರೆ. ಆಗ ಚಾಲ್ಸರ್ ತಮ್ಮ ನಿಜಜೀವನದ ಅನುಭವವನ್ನು ಹೀಗೆ ಹೇಳುತ್ತಾರೆ.
‘ನಾನು ವಿಯೇಟ್ನಾಮ್ನಲ್ಲಿ ಯುದ್ಧವಿಮಾನದ ಪೈಲಟ್ ಆಗಿದ್ದೆ. ಯಶಸ್ವಿಯಾಗಿ ಯುದ್ಧ ವಿಮಾನವನ್ನು ಚಲಾಯಿಸುತ್ತಿದ್ದೆ. ಆದರೆ ಕೊನೆಯ ಬಾರಿ ನಾನಿದ್ದ ಒಂದು ಕ್ಷಿಪಣಿಗೆ ತುತ್ತಾಗಿ ನುಚ್ಚು ನೂರಾಯಿತು. ಸುಟ್ಟು ಭಸ್ಮವಾಯಿತು. ಅದೃಷ್ಟವಶಾತ್ ನಾನು, ಕ್ಷಿಪಣಿ ಬಂದು ವಿಮಾನಕ್ಕೆ ಅಪ್ಪಳಿಸುವುದಕ್ಕೆ ಮುಂಚೆ ಪ್ಯಾರಾಚೂಟ್ ಬಳಸಿ ವಿಮಾನದಿಂದ ಹೊರಕ್ಕೆ ಜಿಗಿದುಬಿಟ್ಟೆ. ಪ್ರಾಣವೇನೋ ಉಳಿಯಿತು. ಆದರೆ ನಾನು ಕಮ್ಯುನಿಸ್ ವಿಯೇಟ್ನಾಮಿನಲ್ಲಿ ಯುದ್ಧ ಖೈದಿಯಾಗಿ ಆರು ವರ್ಷ ಕಳೆಯಬೇಕಾಯಿತು. ಅಲ್ಲಿಂದ ಬಿಡುಗಡೆ ಹೊಂದಿದ ನಂತರ ನಾನು ಪೈಲಟ್ ಕೆಲಸ ಬಿಟ್ಟು ‘ವ್ಯಕ್ತಿತ್ವ ವಿಕಸನ’ ಉಪನ್ಯಾಸಗಳನ್ನು ನೀಡುವ ವೃತ್ತಿಯನ್ನು ಕೈಗೆತ್ತಿಕೊಂಡೆ.
ಒಮ್ಮೆ ನಾನು ಉಪಾಹಾರ ಗೃಹವೊಂದರಲ್ಲಿ ಕುಳಿತಿದ್ದಾಗ ಟೇಬಲ್ಲಿನಲ್ಲಿ ಕುಳಿತಿದ್ದ ಒಬ್ಬಾತ ಬಳಿ ಬಂದು ‘ನೀವು ವಿಯೇಟ್ನಾಮಿನಲ್ಲಿ ಯುದ್ಧವಿಮಾನದ ಪೈಲಟ್ ಆಗಿದ್ದ ಚಾಲ್ಸರ್ ಪ್ಲಂಬ್ ಅಲ್ಲವೇ? ನಿಮ್ಮ ವಿಮಾನ ಕ್ಷಿಪಣಿ ದಾಳಿಗೆ ತುತ್ತಾಗಿ ಸುಟ್ಟು ಭಸ್ಮವಾದರೂ ನೀವು ಪ್ಯಾರಾಚೂಟ್ ಸಹಾಯದಿಂದ ಬದುಕುಳಿದಿರಲ್ಲವೇ?’ ಎಂದರು.
ನಾನು ಆಶ್ಚರ್ಯದಿಂದ ‘ನಿಮಗಿದೆಲ್ಲ ಹೇಗೆ ಗೊತ್ತು?’ ಎಂದು ಪ್ರಶ್ನಿಸಿದೆ. ಆತ ‘ನೀವು ಅಂದು ಬಳಸಿದ ಪ್ಯಾರಾಚೂಟನ್ನು ಪ್ಯಾಕ್ ಮಾಡಿದವನು ನಾನೇ! ನಾನು ಆಗ ವೈಮಾನಿಕ ದಳದಲ್ಲಿ ನೌಕರನಾಗಿದ್ದೆ’ ಎಂದ. ನಾನು ಎದ್ದು ನಿಂತು ಆತನ ಕೈಕುಲುಕಿ ‘ನೀವು ಅಂದು ಪ್ಯಾರಾಚೂಟನ್ನು ನನಗೆ ಪ್ಯಾಕ್ ಮಾಡಿ ಕೊಟ್ಟಿದ್ದಿರಿ. ಅದರಿಂದಾಗಿಯೇ ಇಂದು ನಾನು ಬದುಕುಳಿದಿದ್ದೇನೆ’ ಎಂದು ಹೇಳಿ ಅವರನ್ನು ಬೀಳ್ಕೊಟ್ಟೆ.
ಅಂದು ರಾತ್ರಿ ನನಗೆ ಬಹಳ ಹೊತ್ತು ನಿದ್ದೆ ಬರಲಿಲ್ಲ. ನಾನಂದು ದೊಡ್ಡ ಪೈಲೆಟ್. ಆತ ಸಾಮಾನ್ಯ ನೌಕರ. ಆದರೆ ಅಂದು ಪ್ಯಾರಾಚೂಟ್ ಪ್ಯಾಕ್ ಮಾಡಿಕೊಟ್ಟು ನನ್ನ ಪ್ರಾಣ ಉಳಿಸಿದ್ದ. ನಾನು ಆತನನ್ನು ದಿನಾ ನೋಡುತ್ತಿದ್ದೆ. ಗಮನಿಸಿರಲಿಲ್ಲ. ಒಮ್ಮೆಯೂ ಆತನಿಗೆ ಗುಡ್ ಮಾರ್ನಿಂಗ್ ಹೇಳಿರಲಿಲ್ಲ. ಹೇಗಿದ್ದೀರೆಂದು ನನ್ನ ಪ್ರಾಣವನ್ನು ಉಳಿಸಿದ ಆತನನ್ನು ನಾನು ಅಂದೇ ಗಮನಿಸಬೇಕಿತ್ತು ಎಂದುಕೊಂಡೆ. ನಾನು ಅಂದು ಒಂದು ಅಮೂಲ್ಯ ಪಾಠ ಕಲಿತೆ. ಹೀಗೆ ಹೇಳಿ ಪ್ಲಂಬ್ ಅವರು ತಮ್ಮ ಉಪನ್ಯಾಸವನ್ನು ಮುಗಿಸುತ್ತಾರೆ. ಈ ಉಪನ್ಯಾಸವನ್ನು ಅವರದ್ದೇ ಮಾತುಗಳಲ್ಲಿ ನಾವು ಯೂ ಟ್ಯೂಬಿನಲ್ಲಿ ಕೇಳಬಹುದು!
ಈಗ ಪ್ಲಂಬ್ ಅವರಿಗೆ ಧನ್ಯವಾದಗಳನ್ನು ಹೇಳೋಣ. ನಾವೂ ನಮ್ಮ ಬದುಕಿನಲ್ಲಿ ಇಂದು ಏನಾಗಿದ್ದೇವೆಯೋ ಅದಕ್ಕೆ ಸಹಾಯ ಮಾಡಿದವರು ಯಾರೋ ಒಬ್ಬರು ಇರಬಹುದು. ಅವರು ನಮ್ಮ ತಂದೆ-ತಾಯಿ, ಉಪಾಧ್ಯಾಯರು, ಗೆಳೆಯ ಯಾರೋ ಆಗಿರಬಹುದು. ಇಂದು ಅಂತಸ್ತಿನಲ್ಲಿ ಅವರು ನಮ್ಮ ಸಮಾನರಾಗಿಲ್ಲದೆ ಇರಬಹುದು. ಅವರು ನಮಗೆ ಗುರುತು ಸಿಗದೆ ಇರಬಹುದು. ಇನ್ನು ಮುಂದೆ ಅವರು ಯಾರೇ ಇರಲಿ, ಅವರು ನಮ್ಮೆದುರಿಗೆ ಬಂದಾಗ, ನಾವು ಅವರತ್ತ ಮುಗುಳ್ನಗೆ ಬೀರಬಹುದು. ಹೆಲ್ಲೋ ಹೇಳಬಹುದು ಅಥವಾ ಅವರಿಗೊಂದು ಧನ್ಯವಾದವನ್ನೂ ಹೇಳಬಹುದು. ಏಕೆಂದರೆ ಇಂದು ನಾವೇನಾಗಿದ್ದೇವೋ, ಎಲ್ಲಿದ್ದೇವೋ, ಅದಕ್ಕೆ ಅವರೇ ಕಾರಣರಲ್ಲವೇ?
Gandi jayanti
ಅಸತ್ಯದೊಡನೆ ಮಾಡುವ ಅಸಹಕಾರವನ್ನು ಅಥವಾ ಸತ್ಯಕ್ಕಾಗಿ ಎಸಗುವ ಆಗ್ರಹವನ್ನು ಗಾಂಧೀಜಿ ಸತ್ಯಾಗ್ರಹ ಎಂದು ಕರೆದರು. ಈ ಅಸಹಕಾರ ಯಾವ ಕಾರಣದಿಂದಲೂ ಅಹಿಂಸೆಗೆ ವಿರುದ್ಧವಾಗುವಂತಿಲ್ಲ. ಅದು ಹಿಂಸಾತ್ಮಕವಾದರೆ ಆಗ ಅದು ದುರಾಗ್ರಹವೆನಿಸುತ್ತದೆ. ಆದ್ದರಿಂದಲೇ ಸತ್ಯಾಗ್ರಹಿ ಪುರ್ಣ ಅಹಿಂಸವಾದಿಯಾಗಬೇಕೆಂಬ ನಿಯಮ. ತಾನು ಮಾಡುವ ಅಸಹಕಾರದಿಂದ ಎದುರಾಳಿಗೆ ಯಾವ ರೀತಿಯಿಂದಲೂ ಕೆಡುಕಾಗಬಾರದು. ಸತ್ಯಾಗ್ರಹಿ ಸದಾ ಎದುರಾಳಿಯ ಒಳಿತನ್ನೇ ಗಮನದಲ್ಲಟ್ಟಿರಬೇಕು. ಅಸತ್ಯಕ್ಕಂಟಿದ ಅವನ ಮನಸ್ಸನ್ನು ಪರಿವರ್ತಿಸಿ ಅವನ ಆತ್ಮೋನ್ನತಿಗೆ ಸಹಾಯ ಮಾಡುವುದೇ ಈ ಸತ್ಯಾಗ್ರಹದ ಮೂಲ ಉದ್ದೇಶ. ಎದುರಾಳಿಯಿಂದ ಸತ್ಯಾಗ್ರಹಿಗೆ ಎಷ್ಟೇ ನೋವಾದರೂ ಅದನ್ನು ಸಹಿಸುವ ಹೊಣೆಗಾರಿಕೆ ಇವನದು. ಸತ್ಯಾಗ್ರಹಿಯಲ್ಲಿ ಯಾವ ರಹಸ್ಯ, ಗುಟ್ಟು ಇಲ್ಲವೇ, ಕುತಂತ್ರವೂ ಇರಬಾರದು. ಸತ್ಯಾಗ್ರಹಿ ತಾನು ಮಾಡುವ ಕಾರ್ಯವಿಧಾನಗಳನ್ನೆಲ್ಲ ಪೂರ್ವಭಾವಿ ಯಾಗಿ ಎದುರಾಳಿಗೆ ತಿಳಿಸಿ ಅವನು ಅದಕ್ಕೆ ಬೇಕಾದ ಸಿದ್ಧತೆಗಳನ್ನೆಲ್ಲ ಮಾಡಿಕೊಳ್ಳಲು ನೆರವಾಗಬೇಕು. ಆ ಕಾರಣದಿಂದಲೇ ಗಾಂಧೀಜಿಯವರು ತಾವೆಸಗಿದ ಎಲ್ಲ ಸತ್ಯಾಗ್ರಹಗಳಿಗೂ ಮುನ್ನ ಅದರ ಕ್ರಮ ಮತ್ತು ಉದ್ದೇಶಗಳನ್ನು ಬ್ರಿಟಿಷ್ ಸರ್ಕಾರಕ್ಕೆ ತಿಳಿಸಿ ಅವರಿಗೆ ಯಾವ ರೀತಿಯ ಇಕ್ಕಟ್ಟೂ ಆಗದಂತೆ ನೋಡಿಕೊಳ್ಳ್ಳುತ್ತಿದ್ದರು.
ಗಾಂಧೀಜಿಯವರ ಅಭಿಪ್ರಾಯ ಅಹಿಂಸಾಚರಣೆಯ ಹೊಣೆಗಾರಿಕೆ ಮಿಕ್ಕೆಲ್ಲ ರಾಷ್ಟ್ರಗಳಿಗಿಂತಲೂ ಭಾರತಕ್ಕೆ ಹೆಚ್ಚು - ಎಂದು. ಅನೇಕ ಶತಮಾನಗಳ ದಾರ್ಶನಿಕ ಪರಂಪರೆಯನ್ನು ಹೊಂದಿರುವ ಭಾರತ ಅಹಿಂಸಾಚರಣೆಯಲ್ಲಿ ಮಿಕ್ಕ ರಾಷ್ಟ್ರಗಳಿಗಿಂತಲೂ ಮುಂದೆ ಹೋಗಿ ವಿಶ್ವಕ್ಕೆ ಅಹಿಂಸೆಯ ಸಂದೇಶ ನೀಡುವಂತಾಗಬೇಕು. - ಗಾಂಧೀಜಿಯವರ ಈ ನಂಬಿಕೆಗೆ ಪುಷ್ಟಿ ದೊರೆಯುವಂಥ ಕೆಲವು ನಿದರ್ಶನಗಳು ಇತ್ತೀಚಿನ ಕಾಲದಲ್ಲಿ ನಡೆಯುತ್ತಿರುವುದು ಒಂದು ಆಶಾದಾಯಕ ಚಿಹ್ನೆ. ಅಮೆರಿಕದ ನೀಗ್ರೋ ಜನ ವರ್ಣ ವೈಷಮ್ಯಕ್ಕೆ ಸಿಲುಕಿ ತೊಳಲಾಡುತ್ತಿದ್ದಾಗ ಗಾಂಧೀಜಿಯವರ ಅಹಿಂಸಾತತ್ತ್ವದಿಂದ ಪ್ರೇರಿತನಾದ ಮಾರ್ಟಿನ್ ಲೋಥರ್ ಕಿಂಗ್ ದ್ವೇಷರಹಿತ ಹೋರಾಟದಿಂದ ಬಿಳಿ ಜನರ ಮನಸ್ಸನ್ನೂ ಮಾರ್ಪಡಿಸುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾದ ನಿದರ್ಶನ ಇನ್ನೂ ಅಚ್ಚ ಹಸುರಾಗಿದೆ. 20ನೆಯ ಶತಮಾನದಲ್ಲಿ ಬಹು ವಿಚಾರಪರ ದಾರ್ಶನಿಕನೆನಿಸಿದ ಬರ್ಟ್ರೆಂಡ್ ರಸಲ್ ಯುದ್ಧ ದಾಹದಿಂದ ಉನ್ಮತ್ತರಾಗಿ, ವಿನಾಶಕಾರಕವಾದ ಅಣ್ವಸ್ತ್ರಗಳನ್ನು ಸೃಷ್ಟಿಸಿ, ಸರ್ವನಾಶಕ್ಕೆ ಉದ್ಯುಕ್ತರಾಗಿದ್ದ ಶಕ್ತ ರಾಷ್ಟ್ರಗಳ ಮನ ಒಲಿಸಲು ಬಳಸಿದ ಅಸ್ತ್ರದ ಸ್ವರೂಪವಾದರೂ ಏನು? ಶಾಂತಿಪ್ರಿಯರಾದ ಜನರೆನ್ನೆಲ್ಲ ತಮ್ಮ ಹಿಂದೆ ಸಾಲ್ಗೂಡಿಸಿ ಲಂಡನ್ ನಗರದ ಬೀದಿಗಳಲ್ಲಿ ಕಿಲೋಮೀಟರ್ ಗಟ್ಟಳೆ, ಮಳೆ ಚಳಿಯನ್ನು ಲೆಕ್ಕಿಸದೆ, ಪಾದಯಾತ್ರೆ ನಡೆಸಿ ವಿಶ್ವದ ಜನತೆಯ ಅಭಿಪ್ರಾಯವನ್ನೆಲ್ಲ ಶಾಂತಿಯ ಸಂದೇಶದತ್ತ ವಾಲುವಂತೆ ಮಾಡಿದ ರಸಲ್ಲನ ಈ ಮಾರ್ಗ ಗಾಂಧೀಜಿಯವರ ದಂಡಿಯಾತ್ರೆಯ ಪುನಃ ಸ್ಮರಣೆಯಂತಿದೆ.
ಹಾಗೆ ನೋಡುವುದಾದರೆ ಮಾನವ ಅನಾದಿಕಾಲದಿಂದ ಹಿಂಸಾಮಾರ್ಗವನ್ನು ತುಳಿದು ಅದರಲ್ಲಿ ನೂರಾರು ಪ್ರಯೋಗಗಳನ್ನು ಮಾಡಿ ಅದರಿಂದ ಈಗ ಬೇಸತ್ತಿದ್ದಾನೆ. ಅದು ಈಗ ಗತಕಾಲದ ಪಳೆಯುಳಿಕೆಯಂತಿದೆ. ಆದ್ದರಿಂದಲೇ ಈಗ ಅವನು ಅಹಿಂಸೆಯ ಅರುಣೋದಯದತ್ತ ಆಶಾವಾದಿಯಾಗಿ ಕಣ್ತೆರೆಯುತ್ತಿದ್ದಾನೆ.
ಗಾಂಧೀಜಿಯವರ ಅಭಿಪ್ರಾಯ ಅಹಿಂಸಾಚರಣೆಯ ಹೊಣೆಗಾರಿಕೆ ಮಿಕ್ಕೆಲ್ಲ ರಾಷ್ಟ್ರಗಳಿಗಿಂತಲೂ ಭಾರತಕ್ಕೆ ಹೆಚ್ಚು - ಎಂದು. ಅನೇಕ ಶತಮಾನಗಳ ದಾರ್ಶನಿಕ ಪರಂಪರೆಯನ್ನು ಹೊಂದಿರುವ ಭಾರತ ಅಹಿಂಸಾಚರಣೆಯಲ್ಲಿ ಮಿಕ್ಕ ರಾಷ್ಟ್ರಗಳಿಗಿಂತಲೂ ಮುಂದೆ ಹೋಗಿ ವಿಶ್ವಕ್ಕೆ ಅಹಿಂಸೆಯ ಸಂದೇಶ ನೀಡುವಂತಾಗಬೇಕು. - ಗಾಂಧೀಜಿಯವರ ಈ ನಂಬಿಕೆಗೆ ಪುಷ್ಟಿ ದೊರೆಯುವಂಥ ಕೆಲವು ನಿದರ್ಶನಗಳು ಇತ್ತೀಚಿನ ಕಾಲದಲ್ಲಿ ನಡೆಯುತ್ತಿರುವುದು ಒಂದು ಆಶಾದಾಯಕ ಚಿಹ್ನೆ. ಅಮೆರಿಕದ ನೀಗ್ರೋ ಜನ ವರ್ಣ ವೈಷಮ್ಯಕ್ಕೆ ಸಿಲುಕಿ ತೊಳಲಾಡುತ್ತಿದ್ದಾಗ ಗಾಂಧೀಜಿಯವರ ಅಹಿಂಸಾತತ್ತ್ವದಿಂದ ಪ್ರೇರಿತನಾದ ಮಾರ್ಟಿನ್ ಲೋಥರ್ ಕಿಂಗ್ ದ್ವೇಷರಹಿತ ಹೋರಾಟದಿಂದ ಬಿಳಿ ಜನರ ಮನಸ್ಸನ್ನೂ ಮಾರ್ಪಡಿಸುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾದ ನಿದರ್ಶನ ಇನ್ನೂ ಅಚ್ಚ ಹಸುರಾಗಿದೆ. 20ನೆಯ ಶತಮಾನದಲ್ಲಿ ಬಹು ವಿಚಾರಪರ ದಾರ್ಶನಿಕನೆನಿಸಿದ ಬರ್ಟ್ರೆಂಡ್ ರಸಲ್ ಯುದ್ಧ ದಾಹದಿಂದ ಉನ್ಮತ್ತರಾಗಿ, ವಿನಾಶಕಾರಕವಾದ ಅಣ್ವಸ್ತ್ರಗಳನ್ನು ಸೃಷ್ಟಿಸಿ, ಸರ್ವನಾಶಕ್ಕೆ ಉದ್ಯುಕ್ತರಾಗಿದ್ದ ಶಕ್ತ ರಾಷ್ಟ್ರಗಳ ಮನ ಒಲಿಸಲು ಬಳಸಿದ ಅಸ್ತ್ರದ ಸ್ವರೂಪವಾದರೂ ಏನು? ಶಾಂತಿಪ್ರಿಯರಾದ ಜನರೆನ್ನೆಲ್ಲ ತಮ್ಮ ಹಿಂದೆ ಸಾಲ್ಗೂಡಿಸಿ ಲಂಡನ್ ನಗರದ ಬೀದಿಗಳಲ್ಲಿ ಕಿಲೋಮೀಟರ್ ಗಟ್ಟಳೆ, ಮಳೆ ಚಳಿಯನ್ನು ಲೆಕ್ಕಿಸದೆ, ಪಾದಯಾತ್ರೆ ನಡೆಸಿ ವಿಶ್ವದ ಜನತೆಯ ಅಭಿಪ್ರಾಯವನ್ನೆಲ್ಲ ಶಾಂತಿಯ ಸಂದೇಶದತ್ತ ವಾಲುವಂತೆ ಮಾಡಿದ ರಸಲ್ಲನ ಈ ಮಾರ್ಗ ಗಾಂಧೀಜಿಯವರ ದಂಡಿಯಾತ್ರೆಯ ಪುನಃ ಸ್ಮರಣೆಯಂತಿದೆ.
ಹಾಗೆ ನೋಡುವುದಾದರೆ ಮಾನವ ಅನಾದಿಕಾಲದಿಂದ ಹಿಂಸಾಮಾರ್ಗವನ್ನು ತುಳಿದು ಅದರಲ್ಲಿ ನೂರಾರು ಪ್ರಯೋಗಗಳನ್ನು ಮಾಡಿ ಅದರಿಂದ ಈಗ ಬೇಸತ್ತಿದ್ದಾನೆ. ಅದು ಈಗ ಗತಕಾಲದ ಪಳೆಯುಳಿಕೆಯಂತಿದೆ. ಆದ್ದರಿಂದಲೇ ಈಗ ಅವನು ಅಹಿಂಸೆಯ ಅರುಣೋದಯದತ್ತ ಆಶಾವಾದಿಯಾಗಿ ಕಣ್ತೆರೆಯುತ್ತಿದ್ದಾನೆ.
Subscribe to:
Posts (Atom)
ಕನ್ನಡ SSLC SCORING PACKAGE
ಕೇವಲ 35 ಪುಟದಲ್ಲಿ ಕನ್ನಡ SCORING PACKAGE 2022-23
-
೮,೯ ೧೦ ವಾರ್ಷಿಕ ಕ್ರಿಯಾ ಯೋಜನೆ
-
Sslc padyagala saramsha